ಮಂಗಳೂರು ಹೆದ್ದಾರಿಯಲ್ಲಿ ?ಎದೆಗಾರಿಕೆ
Posted date: 09 Mon, Jan 2012 ? 08:59:44 AM

ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್‌ಅಮಾನ್‌ಬಚ್ಚನ್ ಹಾಗೂ ಎಂ.ಎಸ್.ರವೀಂದ್ರ ನಿರ್ಮಿಸುತ್ತಿರುವ ‘ಎದೆಗಾರಿಕೆ ಚಿತ್ರಕ್ಕೆ ಮಂಗಳೂರು-ಸಕಲೇಶಪುರ ಹೆದ್ದಾರಿಯಲ್ಲಿ ಚಿತ್ರೀಕರಣ ನಡೆದಿದೆ. ಅತುಲ್ ಕುಲಕರ್ಣಿ, ಸೃಜನ್ ಲೋಕೇಶ್, ಧರ್ಮ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಜನವರಿ ಎರಡನೇ ವಾರದಲ್ಲಿ ಆರಂಭವಾಗಲಿದೆ.
     ‘ಕಳ್ಳರ ಸಂತೆ ಚಿತ್ರದ ನಿರ್ದೇಶನಕ್ಕಾಗಿ ಉತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಸುಮನಾ ಕಿತ್ತೂರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಗ್ನಿಶ್ರೀಧರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಿ,ರಾಖೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪಕ್ ಪಂಡಿತ್ ಸಂಗೀತ ನೀಡಿದ್ದಾರೆ. ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅಂಥೋನಿ ರೂಬೆನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಆದಿತ್ಯ, ಶಶಿಕುಮಾರ್, ಅತುಲ್ ಕುಲಕರ್ಣಿ, ಅಚ್ಯುತಕುಮಾರ್, ಸೃಜನ್ ಲೋಕೇಶ್, ಧರ್ಮ, ಶರತ್ ಲೋಹಿತಾಶ್ವಾ, ಭಾವನಾ, ಮೇಘನಾ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed